AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಗೆದ್ದಲುಗಳ ನಿರ್ವಹಣೆಗಾಗಿ ಗೋಧಿಯ ಬೀಜೋಪಚಾರ
ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಗೆದ್ದಲುಗಳ ನಿರ್ವಹಣೆಗಾಗಿ ಗೋಧಿಯ ಬೀಜೋಪಚಾರ
ಗೋಧಿ ಬೆಳೆಯನ್ನು ಹೆಚ್ಚಿನ ರಾಜ್ಯಗಳಲ್ಲಿ, ಗೋಧಿಯನ್ನು ಚಳಿಗಾಲದ ಏಕದಳ ಬೆಳೆಯಾಗಿ ಬೆಳೆಸಲಾಗುತ್ತಿದೆ. ಗೋಧಿ ಬೆಳೆ ನೀರಾವರಿ ಅಥವಾ ನೀರಾವರಿ ಇಲ್ಲದೆ ಬೆಳೆಯಲಾಗುತ್ತದೆ. ಈ ವರ್ಷ, ಮಾನ್ಸೂನ್ ಉತ್ತಮವಾಗಿದೆ ಮತ್ತು ಸಾಕಷ್ಟು ಮಳೆಯಾಗಿದೆ. ಆದ್ದರಿಂದ, ನೀರಾವರಿ ಪ್ರದೇಶದಲ್ಲೂ ರೈತರು ಈ ಬೆಳೆಯನ್ನು ಬೆಳೆಯಬಹುದು. ಬೆಳೆ ಮೊಳಕೆಯೊಡೆದ ನಂತರ ಗೆದ್ದಲುಗಳಿಂದ ಹಾನಿಗೊಳಗಾಗಬಹುದು. ಗೆದ್ದಲುಗಳ ಮುತ್ತಿಕೊಳ್ಳುವಿಕೆಯು ಸಾಮಾನ್ಯವಾಗಿ ಕಪ್ಪು ಮಣ್ಣಿನಲ್ಲಿ ಕಡಿಮೆ ಇರುತ್ತದೆ. ಈ ಕೀಟಪೀಡೆಯಿಂದಾಗಿ ಮರಳು ಮಿಶ್ರಿತ ಮಣ್ಣಿನಲ್ಲಿ ಹಾನಿ ಹೆಚ್ಚು ತೀವ್ರವಾಗಿರುತ್ತದೆ. ಗೆದ್ದಲು ಹುಳುವಿನ ರಾಣಿ ಹಲವಾರು ವರ್ಷಗಳಿಂದ ನಿರಂತರವಾಗಿ ಮೊಟ್ಟೆಗಳನ್ನು ಇಡುತ್ತದೆ ಮತ್ತು ಮಣ್ಣಿನಲ್ಲಿ 7-8 ಅಡಿ ಕೆಳಗೆ ವಾಸಿಸುವ ಕಾರಣ ಗೆದ್ದಲು ಹುಳುವಿನ ರಾಣಿಯ ನಿಯಂತ್ರಣ ಅಸಾಧ್ಯ. ಒಮ್ಮೆ, ಗೆದ್ದಲುಗಳು ಹೊಲದಲ್ಲಿ ನೆಲೆಸಿದ ನಂತರ, ಪ್ರತಿ ವರ್ಷ ಬಾಧೆಯನ್ನು ಕಾಣಬಹುದು.
ಗೆದ್ದಲು ಹುಳುವಿನ ರಾಣಿ ಸಸ್ಯದ ಭಾಗಗಳನ್ನು ಮಣ್ಣಿನ ಮೇಲ್ಮೈಗೆ ಹತ್ತಿರದಲ್ಲಿ ಕತ್ತರಿಸಿ ಬೇರಿನ ವ್ಯವಸ್ಥೆಯನ್ನು ಬಾಧಿಸುತ್ತದೆ. ಪರಿಣಾಮವಾಗಿ, ಸಸ್ಯಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಒಣಗಲು ಒಣಗಲಾರಂಭಿಸುತ್ತವೆ. ಅಂತಹ ಬಾಧಿತ ಸಸ್ಯಗಳನ್ನು ಸುಲಭವಾಗಿ ಮಣ್ಣಿನಿಂದ ಹೊರ ತೆಗೆಯಲಾಗುತ್ತದೆ. ನೀರಾವರಿಯಲ್ಲಿಯೂ ದೀರ್ಘಕಾಲದ ನಂತರ ಬಾಧೆ ಹೆಚ್ಚುತ್ತದೆ. ಗೆದ್ದಲು ಹುಳು ಆರಂಭಿಕ ಹಂತದಲ್ಲಿ ಮತ್ತು ತೆನೆ ಬರುವ ಹಂತದಲ್ಲಿ ಹಾನಿಗೊಳಗಾಗಬಹುದು. ಗೋಧಿ ಬಿತ್ತನೆ ಸಮಯದಲ್ಲಿ ಕೈಗೊಳ್ಳುವ ನಿಯಂತ್ರಣ ಕ್ರಮಗಳು :  ಗೋಧಿ ಬಿತ್ತನೆ ಮಾಡುವ ಮೊದಲು ಹೊಲದಿಂದ ಹಿಂದಿನ ಬೆಳೆ ಉಳಿಕೆಗಳನ್ನು ತೆಗೆದುಹಾಕಿ ಮತ್ತು ನಾಶಪಡಿಸಿ.  ಹೊಲದಲ್ಲಿ ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರವನ್ನು ಮಾತ್ರ ಉಪಯೋಗಿಸಿ.  ಕೊಳೆತ ಕೊಟ್ಟಿಗೆ ಗೊಬ್ಬರ ಬದಲಿಗೆ, ರೈತ ಔಡಲ, ಬೇವಿನ ಅಥವಾ ಹೊಂಗೆ ಹಿಂಡಿಯನ್ನು ಹೆಕ್ಟೇರಿಗೆ 1 ಟನ್ ಉಪಯೋಗಿಸಬಹುದು.  ಕಡಿಮೆ ವೆಚ್ಚದಲ್ಲಿ ಬಿತ್ತನೆ ಮಾಡುವ ಮೊದಲು ಬೀಜೋಪಚಾರವನ್ನು ನೀಡುವ ಮೂಲಕ ಗೆದ್ದಲುಗಳನ್ನು ನಿರ್ವಹಿಸಬಹುದು. ಬೀಜೋಪಚಾರಕ್ಕಾಗಿ, ಬೈಫೆಂತ್ರಿನ್ ೧೦ ಇಸಿ @ ೨೦೦ ಮಿಲಿ ಅಥವಾ ಫಿಪ್ರೊನಿಲ್ ೫ ಎಸ್ಸಿ @ ೫೦೦ ಮಿಲಿ ಅಥವಾ ಕ್ಲೋರ್ಪಿರಿಫಾಸ್ ೨೦ ಇಸಿ@ ೪೦೦ ಮಿಲಿ ತೆಗೆದುಕೊಂಡು ೧೦೦ ಕೆಜಿ ಬೀಜಕ್ಕೆ ೫ ಲೀಟರ್ ನೀರಿನಲ್ಲಿ ಬೇರೆಸಿ. ಬೀಜವನ್ನು ನೆಲದ ಮೇಲೆ ಅಥವಾ ಪ್ಲಾಸ್ಟಿಕ್ ಹಾಳೆಯ ಮೇಲೆ ಹರಡಿ ಮತ್ತು ಈ ದ್ರಾವಣವನ್ನು ಗೋಧಿಯ ಮೇಲೆ ಸಿಂಪಡಿಸಿ. ಕೈಗಳಿಗೆ ರಬ್ಬರ್ ಕೈಗವಚಗಳನ್ನು ಧರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸಂಸ್ಕರಿಸಿದ ಬೀಜವನ್ನು ಒಣಗಲು ರಾತ್ರಿಯಿಡೀ ಇಡಬೇಕು ಮತ್ತು ಮರುದಿನ ಬೆಳಿಗ್ಗೆ ಬಿತ್ತನೆಗಾಗಿ ಬಳಸಬೇಕು.  ಬೀಜೋಪಚಾರವನ್ನು ನೀಡದಿದ್ದರೆ ಮತ್ತು ಗೆದ್ದಲುಗಳ ಬಾಧೆಯು ಕಂಡುಬಂದರೆ, ಫಿಪ್ರೊನಿಲ್ ೫ ಎಸ್‌ಸಿ ೧.೫ ಲೀಟರ್ ಅಥವಾ ಕ್ಲೋರ್‌ಪಿರಿಫೋಸ್ ೨೦ ಇಸಿ ೧.೫ ಲೀಟರ್ನ್ನು ೧೦೦ ಕೆಜಿ ಮರಳಿನೊಂದಿಗೆ ಬೇರೆಸಿ. ನಿಂತಿರುವ ಬೆಳೆಯಲ್ಲಿ ಅವುಗಳನ್ನು ಹರಡಿ ಮತ್ತು ಲಘು ನೀರಾವರಿ ಒದಗಿಸಬೇಕು.  ನಿಯಮಿತವಾಗಿ ನೀರಾವರಿ ನೀಡುವ ಮೂಲಕ ಬೆಳೆಯಲ್ಲಿ ತೇವಾಂಶವನ್ನು ಕಾಪಾಡ ಬೇಕು. ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
7
0