AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಪ್ರವಾಹದ ಸಮಯದಲ್ಲಿ ಜಾನುವಾರುಗಳಿಗಾಗಿ ತೆಗೆದುಕೊಳ್ಳಬೇಕಾಗುವ ಕಾಳಜಿಯ ಸೂಕ್ತ ಕ್ರಮಗಳು
ಪಶುಸಂಗೋಪನೆಪ್ರಾಣಿ ವಿಜ್ಞಾನ ಕೇಂದ್ರ, ಆನಂದ್ ಕೃಷಿ ವಿಶ್ವವಿದ್ಯಾಲಯ
ಪ್ರವಾಹದ ಸಮಯದಲ್ಲಿ ಜಾನುವಾರುಗಳಿಗಾಗಿ ತೆಗೆದುಕೊಳ್ಳಬೇಕಾಗುವ ಕಾಳಜಿಯ ಸೂಕ್ತ ಕ್ರಮಗಳು
ಪ್ರವಾಹ ಸಂಭವನೀಯತೆ ಸಮಯದಲ್ಲಿ ಜಾನುವಾರು ಸಂರಕ್ಷಣೆಗೆ ಸೂಕ್ತ ಕ್ರಮಗಳು: • ಜಾನುವಾರುಗಳನ್ನು ಕಟ್ಟಿಹಾಕದೆ, ಅವುಗಳನ್ನು ಬಿಚ್ಚಿಬಿಡಿ.. • ಪ್ರವಾಹದ ಜಾಗದಿಂದ ಜಾನುವಾರುಗಳನ್ನು ತಕ್ಷಣವೇ ಎತ್ತರವಾದ ಮತ್ತು ಸುರಕ್ಷಿತ ಜಾಗಕ್ಕೆ ಕರೆದೊಯ್ಯಿರಿ. • ಜಾನುವಾರಗಳನ್ನು ಬೇರೆ ಕಡೆ ಕರೆದೊಯ್ಯುವಾಗ ಅವುಗಳಿಗೆ ಒಣ ಮೇವು ಮತ್ತು ನೀರಿನ ವ್ಯವಸ್ಥೆಯನ್ನು ಮಾಡಿ.
ಪ್ರವಾಹದ ನಂತರ ಈ ಕೆಳಕಂಡ ಮುನ್ನೆಚ್ಚರಿಕೆಗಳನ್ನು ಅನುಸರಿಸಿ: • ಜಾನುವಾರಗಳು ಕಲುಷಿತ ನೀರನ್ನು ಕುಡಿಯದಂತೆ ಕಾಳಜಿವಹಿಸಿ. • ಪ್ರವಾಹದ ಕಾರಣದಿಂದ ಜಾನುವಾರುಗಳು ನ್ಯೂಮೋನಿಯಾ ಮತ್ತು ಚರ್ಮದ ರೋಗಗಳಿಂದ ಬಳಲುತಿದ್ದರೆ, ಹತ್ತಿರದ ಪಶು ಆಸ್ಪತ್ರೆಯಿಂದ ಪಶುವೈದ್ಯರನ್ನು ಸಂಪರ್ಕಿಸಿ. • ಮೃತ ಜಾನುವಾರುಗಳ ನೋಂದಣಿಗಾಗಿ ತಕ್ಷಣವೆ ಗ್ರಾಮ ಪಂಚಾಯತವನ್ನು ಸಂಪರ್ಕಿಸಿ. ಜಾನುವಾರುಗಳ ಮರಣಾನಂತರದ ಪರೀಕ್ಷೆಯನ್ನು ಸ್ಥಳೀಯ ಪಶುವೈದ್ಯ ಅಧಿಕಾರಿಯಿಂದ ಮಾಡಲಾಗುವುದು, ಇದಕ್ಕಾಗಿ ಯಾವುದೇ ತೊಂದರೆ ಇಲ್ಲದೆ ಸರ್ಕಾರದ ನೆರವು ಸಿಗುತ್ತದೆ. • ಪ್ರವಾಹದ ಸ್ಥಿತಿ ಕಡಿಮೆಯಾದ ನಂತರ ಸ್ಥಳೀಯ ಅಧಿಕಾರಿಗಳಿಂದ ಆದೇಶಗಳನ್ನು ಪಡೆದ ನಂತರ ಮಾತ್ರ, ಜಾನುವಾರುಗಳನ್ನು ತಮ್ಮ ಹಳೆಯ ಜಾಗಕ್ಕೆ ಕರೆದೊಯ್ಯಿರಿ. • ಮಳೆಯಿಂದ ಒಣ ಮೇವು ನೆನೆದಿದ್ದರೆ, ಅದು ಸ್ವಲ್ಪ ಒಣಗಿದ ನಂತರ ಮೇವನ್ನು ಜಾನುವಾರುಗಳಿಗೆ ಹಾಕಿ. ತುಂಬಾನೇ ನೆನೆದಿದ್ದರೆ ಅದನ್ನು ಉಪಯೋಗಿಸಬೇಡಿ. ಮೂಲ: ಪ್ರಾಣಿ ವಿಜ್ಞಾನ ಕೇಂದ್ರ, ಆನಂದ್ ಕೃಷಿ ವಿಶ್ವವಿದ್ಯಾಲಯ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
411
0