AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಖಾದಿ ಗ್ರಾಮ ಕೈಗಾರಿಕಾ ಆಯೋಗದಿಂದ ಜೇನು ಕ್ಯೂಬ್ನ ಬಿಡುಗಡೆ
ಕೃಷಿ ವಾರ್ತಾದಿ ಎಕನಾಮಿಕ್ ಟೈಮ್ಸ್
ಖಾದಿ ಗ್ರಾಮ ಕೈಗಾರಿಕಾ ಆಯೋಗದಿಂದ ಜೇನು ಕ್ಯೂಬ್ನ ಬಿಡುಗಡೆ
ನವದೆಹಲಿ: ಖಾದಿ ಗ್ರಾಮೋದ್ಯೋಗ ಆಯೋಗವು ಜೇನುತುಪ್ಪದ ಕ್ಯೂಬ್ ನ್ನು ಬಿಡುಗಡೆ ಮಾಡಲಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಮಾಹಿತಿ ನೀಡಿದರು. ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಬಡತನ ಮತ್ತು ನಿರುದ್ಯೋಗವಿದೆ ಎಂದು ಒಪ್ಪಿಕೊಂಡ ಅವರು, ಗ್ರಾಮೀಣ ಕೈಗಾರಿಕೆಗಳನ್ನು ಉತ್ತೇಜಿಸಲು ಸರ್ಕಾರವು ಪ್ರಯತ್ನವನ್ನು ಮಾಡುತ್ತಿದೆ ಎಂದು ಹೇಳಿದರು. ಮುಂದಿನ ಕೆಲವು ತಿಂಗಳುಗಳಲ್ಲಿ ಖಾದಿ ಗ್ರಾಮೋದ್ಯೋಗ ಆಯೋಗದಿಂದ ಜೇನು ಕ್ಯೂಬ್ನ ಬಿಡುಗಡೆ ಮಾಡಲಿದೆ ಎಂದು ನೀತಿನ ಗಡ್ಕರಿ ಹೇಳಿದರು. ಸಕ್ಕರೆಯ ಬದಲಿಗೆ ಜೇನುತುಪ್ಪದ ಕ್ಯೂಬ್ನ ಬಳಸಲು ಸಾಧ್ಯವಾಗುತ್ತದೆ. ಸಕ್ಕರೆಯಂತಹ ಉತ್ತಮ ಗುಣಮಟ್ಟದ ಜೇನುತುಪ್ಪವನ್ನು ತಯಾರಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಲಘು , ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ (ಎಂಎಸ್‌ಎಂಇ) ನಿತಿನ್ ಗಡ್ಕರಿ ಲೋಕಸಭೆಗೆ ತಿಳಿಸಿದರು.
ಮುಂದಿನ ಕೆಲವು ತಿಂಗಳುಗಳಲ್ಲಿ ಖಾದಿ ಗ್ರಾಮೋದ್ಯೋಗ ಜೇನುತುಪ್ಪದ ಕ್ಯೂಬ್ನ ಮಾರಾಟವನ್ನು ಪ್ರಾರಂಭಿಸಲಿದೆ ಎಂದು ಅವರು ಹೇಳಿದರು. ಮುಂದಿನ ಆರು ತಿಂಗಳಲ್ಲಿ ಜನರು ಸಕ್ಕರೆ ಬದಲು ಜೇನುತುಪ್ಪವನ್ನು ಸೇರಿಸುವ ಮೂಲಕ ಚಹಾ ಕುಡಿಯಲು ಸಾಧ್ಯವಾಗುತ್ತದೆ ಎಂದು ಗಡ್ಕರಿ ಹೇಳಿದರು. ಎಂಎಸ್‌ಎಂಇ ಸಚಿವಾಲಯವು 'ಭಾರತ್ ಕ್ರಾಫ್ಟ್' ಹೆಸರಿನ ಹೊಸ ಇ-ಕಾಮರ್ಸ್ ಪೋರ್ಟಲ್ ಅನ್ನು ಪ್ರಾರಂಭಿಸಲಿದೆ ಎಂದು ಅವರು ಮಾಹಿತಿ ನೀಡಿದರು. ಎಂಎಸ್‌ಎಂಇ ಯ ಎಲ್ಲಾ ಉತ್ಪನ್ನಗಳು ಈ ಪೋರ್ಟಲ್‌ನಲ್ಲಿ ಮಾರಾಟಕ್ಕೆ ಲಭ್ಯವಿರುತ್ತವೆ. ಈ ಪೋರ್ಟಲ್ ಮೂಲಕ, ಕಾಶ್ಮೀರದ ಶಾಲುಗಳನ್ನು ನ್ಯೂಯಾರ್ಕ್ನಲ್ಲಿ ಕುಳಿತು ಸಹ ಖರೀದಿಸಬಹುದು. ಮೂಲ - ಎಕನಾಮಿಕ್ಸ್ ಟೈಮ್ಸ್, 28 ನವೆಂಬರ್ 2019 ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ಫೋಟೋ ಕೆಳಗಿನ ಹಳದಿ ಹೆಬ್ಬೆರಳಿನ ಗುರುತನ್ನು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
146
1