AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಬಜೆಟ್ ಘೋಷಣೆ: ರೈತರ ಖಾತೆಗಳಿಗೆ ನೇರವಾಗಿ 6 ಸಾವಿರ ರೂ
ಕೃಷಿ ವಾರ್ತಾದಿ ಎಕನಾಮಿಕ್ ಟೈಮ್ಸ್
ಬಜೆಟ್ ಘೋಷಣೆ: ರೈತರ ಖಾತೆಗಳಿಗೆ ನೇರವಾಗಿ 6 ಸಾವಿರ ರೂ
ಕೇಂದ್ರ ಹಣಕಾಸು ಸಚಿವ ಪಿಯೂಷ್ ಗೋಯಲ್ ಇಂದು ಲೋಕಸಭೆಯಲ್ಲಿ ದೇಶದ ಮಧ್ಯಂತರ ಬಜೆಟ್ ಮಂಡಿಸಿದರು. ಬಜೆಟ್ನಲ್ಲಿ ರೈತರ ಪರವಾಗಿ ಮಹತ್ವದ ಪ್ರಕಟಣೆಗಳನ್ನು ಮಾಡಲಾಗಿತ್ತು. ಹಣಕಾಸು ಸಚಿವ ಹೇಳಿಕೆ ಪ್ರಕಾರ ದೇಶದ ಎಲ್ಲಾ ರೈತರಿಗೆ ನೇರವಾಗಿ 6 ಸಾವಿರ ರೂ 'ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ' ಅಡಿಯಲ್ಲಿ ನಡೆಯಲಿದೆ. ಅಂತೆಯೇ, ಪ್ರತಿ ವರ್ಷ ಐದು ಎಕರೆಗಳಷ್ಟು ಅಥವಾ ಎರಡು ಹೆಕ್ಟೇರ್ ವರೆಗೆ ಭೂಮಿಗೆ ರೂ.6,000 ಆರ್ಥಿಕ ನೆರವು ನೀಡಲಾಗುತ್ತದೆ. ಈ ಹಣವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುವುದು.
೧೨ ಕೋಟಿ ರೈತರ ಕುಟುಂಬಗಳಿಗೆ ಲಾಭ_x000D_ ಈ ಯೋಜನೆಯಡಿ ಸುಮಾರು ೧೨ ಕೋಟಿ ರೈತರ ಕುಟುಂಬಗಳು ಪ್ರಯೋಜನ ಪಡೆದುಕೊಳ್ಳುತ್ತವೆ. ಈ ಯೋಜನೆಯು ೧ ಡಿಸೆಂಬರ್, ೨೦೧೮ ರಿಂದ ಜಾರಿಗೆ ಬಂದಿದೆ. ಈ ಮೊತ್ತವು ರೂ.೨೦೦೦ ಎರಡ-ಮೂರು ಸಮಾನ ಕಂತುಗಳಲ್ಲಿ ನೀಡಲಾಗುವುದು. ರೈತರ ಖಾತೆಗಳಲ್ಲಿ ರೂ.೨೦೦೦ ರೂಪಾಯಿಗಳ ಮೊದಲ ಕಂತನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು, ಅದರ ಪಟ್ಟಿಯು ಸಿದ್ಧವಾಗಲಿದೆ. ಈ ಯೋಜನೆಯಲ್ಲಿ, ಸರ್ಕಾರ ೭೫ ಕೋಟಿ ರೂಪಾಯಿಗಳನ್ನು ನಿಗದಿಪಡಿಸಿದೆ. ಬಜೆಟ್ನಲ್ಲಿ, ಸರ್ಕಾರವು ೨೨ ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಿದೆ ಎಂದು ಹಣಕಾಸು ಸಚಿವ ಹೇಳಿದರು. ನೈಸರ್ಗಿಕ ವಿಕೋಪದಿಂದ ಬಳಲುತ್ತಿರುವ ಎಲ್ಲ ರೈತರಿಗೆ, ೨% ನಷ್ಟು ಬಡ್ಡಿ ಮತ್ತು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿದವರಿಗೆ ೩% ಬಡ್ಡಿಯ ಲಾಭ ಸಿಗುವುದು. ಈ ರೀತಿಯಾಗಿ, ಅವರಿಗೆ ೫% ಬಡ್ಡಿ ರಿಯಾಯಿತಿ ದೊರೆಯುತ್ತದೆ._x000D_ ಮೂಲ: ಎಕನಾಮಿಕ್ ಟೈಮ್ಸ್, ಫೆಬ್ರವರಿ
117
0