AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಕೃಷಿ ಮಾರುಕಟ್ಟೆ ಅಭಿವೃದ್ಧಿಗೆ ಜರ್ಮನಿ ಮತ್ತು ಭಾರತದ ನಡುವಿನ ಒಪ್ಪಂದ_x000D_
ಕೃಷಿ ವಾರ್ತಾಔಟ್ ಲುಕ್ ಕೃಷಿ
ಕೃಷಿ ಮಾರುಕಟ್ಟೆ ಅಭಿವೃದ್ಧಿಗೆ ಜರ್ಮನಿ ಮತ್ತು ಭಾರತದ ನಡುವಿನ ಒಪ್ಪಂದ_x000D_
ನವದೆಹಲಿ: ಭಾರತ ಮತ್ತು ಜರ್ಮನಿ ದೇಶದಲ್ಲಿ ಕೃಷಿ ಮಾರುಕಟ್ಟೆ ಅಭಿವೃದ್ಧಿಯಲ್ಲಿ ಸಹಕಾರಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಉಭಯ ದೇಶಗಳು ಜಂಟಿ ನಿರ್ಣಯ ಪತ್ರಕ್ಕೆ ಸಹಿ ಹಾಕಿವೆ. ಈ ಸಂದರ್ಭದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಭಾರತದ ಆದ್ಯತೆಯು ರೈತರಾಗಿದ್ದಾರೆ ಎಂದು ಹೇಳಿದರು. ಕೃಷಿ ಮತ್ತು ಸಂಬಂಧಿತ ವಲಯದಲ್ಲಿ ಸುಧಾರಿತ ಉತ್ಪಾದಕತೆ, ವೆಚ್ಚ ಕಡಿತ, ಸ್ಪರ್ಧಾತ್ಮಕ ಮಾರುಕಟ್ಟೆಯ ಲಭ್ಯತೆಯ ಮೂಲಕ ೨೦೨೨ ರ ಹೊತ್ತಿಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಇದರ ಉದ್ದೇಶವಾಗಿದೆ.
ಜಂಟಿ ನಿರ್ಣಯ ಪತ್ರಕ್ಕೆ ಭಾರತದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರರವರು ಮತ್ತು ಜರ್ಮನಿಯ ಕೃಷಿ ಮತ್ತು ಆಹಾರ ಸಚಿವ ಜೂಲಿಯಾ ಕ್ಲಾಕ್ನರ್ ಸಹಿ ಹಾಕಿದರು. ಕೃಷಿ ರಫ್ತು ನೀತಿಯ ಗುರಿ ೨೦೨೨ ರ ವೇಳೆಗೆ ೬ ಕೋಟಿ ಡಾಲರಗೆ ದ್ವಿಗುಣಗೊಳ್ಳಲಿದೆ ಎಂದು ತೋಮರ್ ಹೇಳಿದರು._x000D_ _x000D_ ಕೃಷಿ ಯಾಂತ್ರೀಕರಣ ಮತ್ತು ಸುಗ್ಗಿಯ ನಂತರದ ನಿರ್ವಹಣೆಯಲ್ಲಿ ಜರ್ಮನಿಯು ಪರಿಣತಿಯನ್ನು ಹೊಂದಿದೆ, ಇದು ರೈತರ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಜೂಲಿಯಾ ಕ್ಲಾಕ್ನರ್ ಈ ಸಂದರ್ಭದಲ್ಲಿ ಹೇಳಿದರು. ಇಬ್ಬರು ಮಂತ್ರಿಗಳು ಕೃಷಿ ಯಾಂತ್ರೀಕರಣ, ಕೊಯ್ಯಲು ನಂತರದ ನಿರ್ವಹಣೆ ಮತ್ತು ಕೃಷಿಗೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಚರ್ಚಿಸಿದರು._x000D_ _x000D_ ಮೂಲ - ಔಟ್‌ಲುಕ್ ಅಗ್ರಿಕಲ್ಚರ್,1 ನವೆಂಬರ್ 2019_x000D_ ಎಲ್ಲಾ ರಾಜ್ಯಗಳಿಗೆ_x000D_ _x000D_ ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ಫೋಟೋ ಕೆಳಗೆ ಹಳದಿ ಹೆಬ್ಬೆರಳು ಚಿನ್ಹೆಯನ್ನು ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ._x000D_
684
0