AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಹತ್ತಿಯ ಗುಲಾಬಿ ಕಾಯಿಕೊರಕದ ನಿರ್ವಹಣೆಗಾಗಿ ಬಿತ್ತನೆ ಮಾಡುವ ಮುಂಚೆ ತೆಗೆದುಕೋಳ್ಳುವ  ಮುನ್ನೆಚ್ಚರಿಕೆಯ ಕ್ರಮಗಳು
ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಹತ್ತಿಯ ಗುಲಾಬಿ ಕಾಯಿಕೊರಕದ ನಿರ್ವಹಣೆಗಾಗಿ ಬಿತ್ತನೆ ಮಾಡುವ ಮುಂಚೆ ತೆಗೆದುಕೋಳ್ಳುವ ಮುನ್ನೆಚ್ಚರಿಕೆಯ ಕ್ರಮಗಳು
ಕಳೆದ ವರ್ಷದಲ್ಲಿ ಬಾಧೆಗೊಂಡಿರುವ ಪ್ರದೇಶದಲ್ಲಿ ಹತ್ತಿಯ ಗುಲಾಬಿ ಕಾಯಿಕೊರಕ ಬಾಧೆಯಾಗಿರಬಹುದು . ಆದ್ದರಿಂದ, ರೈತರು ಈ ಕೀಟಕ್ಕಾಗಿ ಕೆಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು.  ಹತ್ತಿಯ ಕಟ್ಟಿಗೆಗಳು ಇನ್ನು ನಿಮ್ಮ ಹೊಲದಲ್ಲಿಯೇ ಅಥವಾ ಬದುಗಳಲ್ಲಿದ್ದರೆ, ಅವುಗಳನ್ನು ನಾಶಪಡಿಸಿ.  ಸಣ್ಣ ಗಾತ್ರದ ಹತ್ತಿ ಕಟ್ಟಿಗೆಗಳನ್ನು ಕೊಡಲಿಯ ಸಹಾಯದಿಂದ ತುಂಡುಗಳನ್ನು ಮಾಡಿ ಮತ್ತು ಸಾವಯವ ಗೊಬ್ಬರವನ್ನು ತಯಾರಿಸಲು ಉಪಯೋಗಿಸಿ.  ಹತ್ತಿಯ ನೂಲು ತೆಗೆಯುವುವ ಕಾರ್ಖಾನೆಗಳ ಆವರಣದಲ್ಲಿ ಮೋಹಕ ಬಲೆಗಳನ್ನು ಸ್ಥಾಪಿಸಿ.  ಪ್ಲಾಸ್ಟಿಕ್ ಹಾಳೆಯಿಂದ ಹತ್ತಿ ಕಟ್ಟಿಗೆಗಳಿಂದ ತುಂಡುಗಳ ಮುಚ್ಚಿ ಮತ್ತು ಅದನ್ನು ಇಂಧನಕ್ಕಾಗಿ ಸಂಗ್ರಹಿಸಿಡಬಹುದು .
 ಮುನ್ನಚಿತವಾಗಿ ಕಟಾವಿಗೆ ಬರುವ ತಳಿಗಳನ್ನು ಆಯ್ಕೆ ಮಾಡಿ.  ಸಮಯಕ್ಕೆ ಸರಿಯಾಗಿ ಬಿತ್ತನೆ ಮಾಡಿ ; ಬೇಗನೆ ಬಿತ್ತನೆ ಮಾಡುವುದರಿಂದ ಬಾಧೆ ಹೆಚ್ಚಾಗುತ್ತದೆ.  ಬಿಟಿ-ಹತ್ತಿ ಬೀಜಗಳನ್ನು ಬಿತ್ತುವುದರ ಜೊತೆಗೆ ಬಿಟಿ ರಹಿತ ಹತ್ತಿ ಬೀಜಗಳನ್ನು ರೆಫ್ಯೂಜಿಯಾ ಬೀಜಗಳಾಗಿ ಬಿತ್ತಿ ಪ್ಯಾಕೆಟ್ನಲ್ಲಿ ಒದಗಿಸದ ಪ್ರಮಾಣದಲ್ಲಿ ಬಳಸಿ.  ಸಮತೋಲಿತ ರಸಗೊಬ್ಬರ ಮತ್ತು ನೀರಾವರಿ ಬಳಸಿ.  ಬೆಳೆ ಪಲ್ಲಟನೆಯನ್ನು ಮತ್ತು ಹತ್ತಿಯಲ್ಲಿ ಸರಿಯಾದ ಅಂತರವನ್ನು ಅನುಸರಿಸಿ. ಡಾ. ಟಿ. ಎಂ. ಭೋರ್ಪೋಡಾ, ಎಕ್ಸ್. ಕೀಟಶಾಸ್ತ್ರದ ಪ್ರೊಫೆಸರ್, ಬಿ. ಎ. ಕೃಷಿ ಕಾಲೇಜು, ಆನಂದ್ ಕೃಷಿ ವಿಶ್ವವಿದ್ಯಾಲಯ, ಆನಂದ್- 388 110 (ಗುಜರಾತ, ಭಾರತ) ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
529
0