AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಹಣ್ಣು ಕೊರೆಕ ಹುಳುವಿನ ಸಾವಯವ ಹತೋಟಿ ಕ್ರಮಗಳು
ಸಾವಯವ ಕೃಷಿಶೇತಕರಿ ಮಾಸಿಕ್ (ಮರಾಠಿ ಮಾಸ ಪತ್ರಿಕೆ)
ಹಣ್ಣು ಕೊರೆಕ ಹುಳುವಿನ ಸಾವಯವ ಹತೋಟಿ ಕ್ರಮಗಳು
ಟೊಮ್ಯಾಟೋ, ಬದನೆಕಾಯಿ, ಬೆಂಡೆ, ಬಟಾಣಿ ಮುಂತಾದ ಬೆಳೆಗಳಲ್ಲಿ ಈ ಕೀಟಗಳ ಬಾಧೆ ಕಂಡುಬರುತ್ತದೆ. ಹಣ್ಣು ಕೊರೆಕದಿಂದ ಸೋಂಕು ಉಂಟಾಗುತ್ತದೆ. ಇದರಿಂದಾಗಿ ರೈತರಿಗೆ ದೊಡ್ಡ ಆರ್ಥಿಕ ನಷ್ಟವನ್ನುಂಟು ಮಾಡುತ್ತದೆ. ಆದ್ದರಿಂದ, ಈ ಕೀಟಗಳನ್ನು ಸರಿಯಾದ ಸಮಯದಲ್ಲಿ ಹತೋಟಿ ಮಾಡಬೇಕು.
1. ಈ ಹುಳುಗಳನ್ನು ಹತೋಟಿ ಮಾಡಲು, ಮೆಕ್ಕೆಜೋಳ,ಅಲಂಸಂದಿ ಬೆಳೆಗಳನ್ನು ಮುಖ್ಯ ಬೆಳೆಯೊಂದಿಗೆ ಬಲೆ ಬೆಳೆಯಾಗಿ ನಾಟಿಬೇಕು. 2. ಟೊಮ್ಯಾಟೋ ಬೆಳೆಯಲ್ಲಿ, ೧೪-೧೫ ಬೆಳೆ ಸಾಲುಗಳ ನಡುವೆ ಚೆಂಡು ಹೂಗಳನ್ನು ಎರಡು ಸಾಲುಗಳಲ್ಲಿ ನಾಟಿ ಮಾಡಬೇಕು. ಚೆಂಡು ಹೂಗಳನ್ನು ಬಿತ್ತನೆಯನ್ನು ಟೊಮ್ಯಾಟೋ ಬೆಳೆ ನಾಟಿ ಮಾಡುವ 15 ದಿನಗಳ ಮೊದಲು ಬಿತ್ತನೆ ಮಾಡಬೇಕು. 3. ನಾಟಿ ಮಾಡಿದ 40-45 ದಿನಗಳ ನಂತರ, ಟ್ರೈಕೊಗ್ರಾಮಾ ಚಿಲೋನಿಸ್‌ನ ಪರಜೀವಿಗಳನ್ನು ಎಕರೆಗೆ ೧ ಲಕ್ಷ ಪ್ರತಿ ಎಕರೆ ಹೊಲಗಳಲ್ಲಿ ಬಿಡಬೇಕು. ಈ ಕೀಟಗಳು ಪ್ರೌಢ ಪತಂಗದ ಮೊಟ್ಟೆಗಳಲ್ಲಿ ತನ್ನ ಮೊಟ್ಟೆಗಳನ್ನು ಇಡುವುದರಿಂದ ಅದು ಹಣ್ಣಿನ ಕೊರೆಕದ ಮೊಟ್ಟೆಗಳ ಭ್ರೂಣವನ್ನು ನಾಶಪಡಿಸುತ್ತದೆ. 4. ಹಣ್ಣಿನ ಕೊರೆಕವನ್ನು ಹತೋಟಿ ಮಾಡಲು ಬೇವಿನ ಬೀಜದ ಕಷಾಯವನ್ನು 5% ಸಿಂಪಡಿಸಬೇಕು. 5. ಎಕರೆಗೆ ೫-೬ ಮೋಹಕ ಬಲೆಗಳನ್ನು ಹೊಲದಲ್ಲಿ ಅಳವಡಿಸಬೇಕು 6. ಬಾಧೆಗೊಂಡ ಹಣ್ಣುಗಳನ್ನು ತೆಗೆದು ನಾಶಪಡಿಸಬೇಕು. ಮೂಲ: ಶೇತಕರಿ ಮಾಸಿಕ್ (ಮರಾಠಿ ಮಾಸ ಪತ್ರಿಕೆ) ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
182
0