ಸಾವಯವ ಕೃಷಿವಾಸುದಾ ಒರಗನಿಕ್ಸ್
ಮೆಣಸಿನಕಾಯಿ,ಬೆಳ್ಳುಳ್ಳಿ,ಈರುಳ್ಳಿ ಹಾಗು ಶುಂಠಿಯ ಕಷಾಯ ತಯಾರಿಕೆ
ಮೆಣಸಿನಕಾಯಿ,ಬೆಳ್ಳುಳ್ಳಿ,ಈರುಳ್ಳಿ ಹಾಗು ಶುಂಠಿಯ ಕಷಾಯದಲ್ಲಿರುವ ಪ್ರಮುಖ ಘಟಕಗಳಾದ ಕ್ಯಾಪ್ಸಸಿನ್-ಮೆಣಸಿನಕಾಯಿ,ಅಲ್ಲಸಿನ್- ಬೆಳ್ಳುಳ್ಳಿ,ಈರುಳ್ಳಿ-ಗಂಧಕ,ಜೆಂಜಿರೊಲ್-ಶುಂಠಿ ಔಷಧಿಯ ಗುಣಗಳಿಂದಾಗಿ ಕೀಟಪೀಡೆ ಮತ್ತು ರೋಗಗಳ ನಿಯಂತ್ರಣ ಮಾಡಬಹುದು.
ಕಷಾಯವನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು-
ಮೆಣಸಿನಕಾಯಿ-೨೫೦ಗ್ರಾಂ
ಬೆಳ್ಳುಳ್ಳಿ-೨೫೦ಗ್ರಾಂ
ಈರುಳ್ಳಿ-೨೫೦ಗ್ರಾಂ
ಶುಂಠಿ-೨೫೦ಗ್ರಾಂ
ಕಾಟನ್ ಬಟ್ಟೆ, ಬಕೆಟ್.
ಮೆಣಸಿನಕಾಯಿ,ಬೆಳ್ಳುಳ್ಳಿ,ಈರುಳ್ಳಿ ಹಾಗು ಶುಂಠಿಯನ್ನು ರುಬ್ಬಿಕೊಳ್ಳಬೇಕು ತದನಂತರ ಉಗುರ ಬೆಚ್ಚನೆಯ ನೀರಿನಲ್ಲಿ ಹಾಕಿ ಚೆನ್ನಾಗಿ ಕಲಕಬೇಕು.
ಆ ದ್ರಾವಣವನ್ನು ೫-೬ ಗಂಟೆಗಳ ಕಾಲ ಹಾಗೆ ಇಡಬೇಕು.
ಅದಾದ ಮೇಲೆ ಬಟ್ಟೆಯ ಸಹಾಯದಿಂದ ಸೋಸಿಕೊಂಡು, ೫೦೦ ಮೀ.ಲೀ ದ್ರಾವಣವನ್ನು ೧೬ ಲೀಟರ್ ಪಂಪಿನಲ್ಲಿ ಬೇರೆಸಿ ಸಿಂಪಡಿಸಬೇಕು.
ಈ ಕಷಾಯದಿಂದಾಗಿ ನಿಯಂತ್ರಣಕ್ಕೆ ಬರುವ ಕೀಟಗಳೆಂದರೆ ಕೊರಕ ಕೀಟಗಳ ಸಣ್ಣ ಮತ್ತು ಮಧ್ಯಮ ಗಾತ್ರದ ಮರಿಹುಳುಗಳು,ಥ್ರಿಪ್ಸ್ ನುಶಿ,ಮೈಟ್ ನುಶಿ ಅಥವಾ ಕೆಂಪು ಮೈಟ್ ನುಶಿ,ಜೇಡರ ನುಶಿಗಳನ್ನು ನಿರ್ವಹಣೆ ಮಾಡಬಹುದು.
ಮೂಲ: ವಸುಧಾ ಒರ್ಗ್ಯಾನಿಕ್ಸ್
ಈ ಪ್ರಮುಖ ಮಾಹಿತಿಯನ್ನು ನಿಮ್ಮ ಕೃಷಿ ಸ್ನೇಹಿತರೊಂದಿಗೆ ಶೇರ್ ಮಾಡಿ.