AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಬಟಾಣಿಯಲ್ಲಿ ಸಮಗ್ರ ಕೀಟಪೀಡೆ ಮತ್ತು ರೋಗ ನಿರ್ವಹಣೆ
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಬಟಾಣಿಯಲ್ಲಿ ಸಮಗ್ರ ಕೀಟಪೀಡೆ ಮತ್ತು ರೋಗ ನಿರ್ವಹಣೆ
ಬಟಾಣಿಯಲ್ಲಿ ಬರುವ ಪ್ರಮುಖ ಕೀಟಗಳು ಸಸ್ಯ ಹೇನು : ಈ ಕೀಟಗಳ ಮರಿ ಹುಳುಗಳು ಮತ್ತು ಪ್ರೌಢ ಹೇನುಗಳು ಸಸ್ಯಗಳ ಕೋಮಲವಾದ ಭಾಗಗಳಿಂದ ರಸವನ್ನು ಹೀರುವ ಮೂಲಕ ಹಾನಿಯನ್ನುಂಟು ಮಾಡುತ್ತವೆ. ಈ ಕೀಟಗಳ ಬಾಧೆಯ ನಂತರ, ಎಲೆಗಳ ಮೇಲೆ ಕಪ್ಪು ಬಣ್ಣದ ಶಿಲಿಂದ್ರಗಳು ಕಾಣಿಸಿಕೋಳ್ಳುತ್ತವೆ. ಇದು ಸಸ್ಯಗಳ ಬೆಳವಣಿಗೆ ಮತ್ತು ಇಳುವರಿಯ ಮೇಲೆ ಪರಿಣಾಮ ಬೀರುತ್ತದೆ.
ನಿರ್ವಹಣೆ: _x000D_ 1. ಸಸ್ಯ ಹೇನಿನಿಂದ ಬಾಧೆಗೊಂಡ ಭಾಗಗಳನ್ನು ತೆಗೆದು ನಾಶಪಡಿಸಿ. _x000D_ 2. ಪ್ರತಿ ಎಕರೆಗೆ ಬೇವಿನ ಎಣ್ಣೆ ೧೫೦೦ ಪಿಪಿಎಂ ೧ ಲೀಟರನ್ನು ೨೦೦ ಲೀಟರ್ ನೀರಿನಲ್ಲಿ ಬೇರೆಸಿ ಸಿಂಪಡಿಸಿ ಮತ್ತು ೧೦ ದಿನಗಳ ಮಧ್ಯಂತರದಲ್ಲಿ ಸಿಂಪಡಿಸಿ._x000D_ 3. ಏಕಾಏಕಿ ಹೆಚ್ಚಿನ ಬಾಧೆ ಸಂಭವಿಸಿದಲ್ಲಿ, ಥಿಯೋಮಿಥಾಕ್ಸಮ್ ೨೫ % ಡಬ್ಲ್ಯೂಜಿ @ ೪೦ ಗ್ರಾಂ / ೨೦೦ ಲೀಟರ್ ನೀರಿನಲ್ಲಿ ಪ್ರತಿ ಎಕರೆಗೆ ಸಿಂಪಡಿಸಬೇಕು._x000D_ _x000D_ ಎಲೆ ಸುರಂಗ ಕೀಟ: ಸಸ್ಯಗಳ ಬೆಳವಣಿಗೆಯ ಹಂತದಲ್ಲಿ ಈ ಕೀಟ ಹೆಚ್ಚು ಹಾನಿಯನ್ನುಂಟು ಮಾಡುತ್ತದೆ. ಈ ಕೀಟದ ಮರಿಹುಳುಗಳು ಎಲೆಗಳಲ್ಲಿ ಸುರಂಗವನ್ನು ಮಾಡುತ್ತದೆ ಮತ್ತು ಎಲೆಗಳ ಹಸಿರು ಪತ್ರ ಹರಿತ್ತನ್ನು ತಿನ್ನುವ ಮೂಲಕ ಹಾನಿಯನ್ನುಂಟು ಮಾಡುತ್ತದೆ._x000D_ _x000D_ ನಿರ್ವಹಣೆ: _x000D_ ೧. ಈ ಕೀಟವನ್ನು ನಿಯಂತ್ರಿಸಲು ೫% ಪ್ರತಿಶತದಷ್ಟು ಬೇವಿನ ತಿರುಳಿನ ಪುಡಿಯನ್ನು (ಪ್ರತಿ ಲೀಟರ್ ನೀರಿಗೆ ೪೦ ಗ್ರಾಂ ) ಸಿಂಪಡಿಸುವುದು ಪ್ರಯೋಜನಕಾರಿ ಎಂದು ಕಂಡುಬಂದಿದೆ._x000D_ _x000D_ ೨. ಏಕಾಏಕಿ ಹೆಚ್ಚಿನ ಬಾಧೆ ಸಂಭವಿಸಿದಲ್ಲಿ ,ಪ್ರತಿ ಎಕರೆಗೆ ಇಮಿಡಾಕ್ಲೋಪ್ರಿಡ17.8% ಎಸ್ಎಲ್ @ ೪೦ ಮಿಲಿ / ೨೦೦ ಲೀಟರ್ ನೀರು ಅಥವಾ ಥಿಯೋಮಿಥಾಕ್ಸಮ್ ೨೫ % ಡಬ್ಲ್ಯೂಜಿ @ ೪೦ ಗ್ರಾಂ ಪ್ರತಿ ಎಕರೆಗೆ ೨೦೦ ಲೀಟರ್ಗೆ ೧೦ ರಿಂದ 15 ದಿನಗಳ ಮಧ್ಯಂತರದಲ್ಲಿ ಸಿಂಪಡಿಸಬೇಕು._x000D_ _x000D_ ಬಟಾಣಿಯಲ್ಲಿ ಪ್ರಮುಖ ರೋಗ_x000D_ _x000D_ ಬೂದಿರೋಗ : ಕಾಂಡ, ಎಲೆಗಳು ಮತ್ತು ಬೀಜಕೋಶಗಳು ಈ ರೋಗದಿಂದ ಬಾಧೆಗೊಳ್ಳುತ್ತವೆ. ರೋಗ ಪೀಡಿತ ಗಿಡದ ಭಾಗದ ಮೇಲೆ ಬುದು ಬಣ್ಣದ ಪುಡಿಯನ್ನು ಕಾಣುತ್ತವೆ, ಕ್ರಮೇಣ ಇಡೀ ಎಲೆ ಮತ್ತು ಸಸ್ಯವನ್ನು ಬಿಳಿ ಪುಡಿಯಿಂದ ಆವರಿಸಿರುತ್ತದೆ ಮತ್ತು ನಂತರ ಎಲೆಗಳು ಉದುರಿ ಹೋಗುತ್ತವೆ._x000D_ _x000D_ ನಿರ್ವಹಣೆ: _x000D_ ೧ . ರೋಗ ನಿರೋಧಕ ತಳಿಗಳನ್ನು ಬೆಳೆಯಿರಿ._x000D_ ೨ . ಏಕಾಏಕಿ ಹೆಚ್ಚಿನ ಬಾಧೆ ಪ್ರಾರಂಭದಲ್ಲಿ, ಪ್ರತಿ ಎಕರೆಗೆ ೨೦೦ ಲೀಟರ್ ನೀರಿನಲ್ಲಿ ಎಕರೆಗೆ ಸಲ್ಫರ್ (ಗಂಧಕ) ೮೦ % ಡಬ್ಲ್ಯೂಜಿ @ ೫೦೦ ಗ್ರಾಂ ಸಿಂಪಡಿಸಿ._x000D_ ಸೊರಗು ರೋಗ : ಇದು ಬಟಾಣಿಗಳ ಶಿಲೀಂಧ್ರ ರೋಗ. ಪೀಡಿತ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಸಸ್ಯಗಳು ಒಣಗುತ್ತವೆ._x000D_ _x000D_ ನಿರ್ವಹಣೆ: _x000D_ ೧ . ಬೆಳೆಯಲ್ಲಿ ರೋಗ ತಡೆಗಟ್ಟುವಿಕೆಗಾಗಿ, ಥೈರಾಮ್ ೨ ಗ್ರಾಂ + ಕಾರ್ಬೆಂಡಜಿಮ್ ೧ ಗ್ರಾಂ ಅಥವಾ ಟ್ರೈಕೊಡರ್ಮಾ ೪ ಗ್ರಾಂ + ಬೀಟಾವಾಕ್ಸ್ ೨ ಗ್ರಾಂ / ಪ್ರತಿ ಕೆಜಿ ಬೀಜಕ್ಕೆ ಬಿತ್ತನೆ ಮಾಡುವ ಮೊದಲು ಬೀಜೋಪಚಾರವನ್ನು ಮಾಡಬೇಕು._x000D_ ೨ . ರೋಗಕ್ಕೆ ನಿರೋಧಕವಾದ ತಳಿಗಳನ್ನು ಆಯ್ಕೆ ಮಾಡಬೇಕು._x000D_ ೩ . ಬೆಳೆಯಲ್ಲಿ ರೋಗವನ್ನು ತಡೆಗಟ್ಟಲು, ಕಾರ್ಬೆಂಡಜಿಮ ೫೦ % WP@ ೨೦೦ ಗ್ರಾಂನ್ನು ಮಣ್ಣಿನಲ್ಲಿ ೨೦೦ ಲೀಟರ್ ನೀರಿನಲ್ಲಿ ಬೇರೆಸಿ ಮಣ್ಣಿಗೆ ಹಾಕಬೇಕು._x000D_ _x000D_ ಮೂಲ: ಆಗ್ರೊಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್ _x000D_ _x000D_ ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ಫೋಟೋ ಕೆಳಗೆ ಹಳದಿ ಹೆಬ್ಬೆರಳು ಗುರುತಿನ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ._x000D_
193
0