AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಕೃಷಿ, ರೈತರು ಮತ್ತು ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಪಿಎಂ ಕಿಸಾನ್ ಸಂಪದಾ ಯೋಜನೆ
ಕೃಷಿ ವಾರ್ತಾAgrostar
ಕೃಷಿ, ರೈತರು ಮತ್ತು ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಪಿಎಂ ಕಿಸಾನ್ ಸಂಪದಾ ಯೋಜನೆ
ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಂಪದಾ ಯೋಜನೆ (ಪಿಎಂಕೆಎಸ್‌ವೈ) ಅಡಿಯಲ್ಲಿ ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಸುಮಾರು 32 ಯೋಜನೆಗಳಿಗೆ ಕೇಂದ್ರ ಸರ್ಕಾರ ಇತ್ತೀಚೆಗೆ ಅನುಮೋದನೆ ನೀಡಿದೆ. ಸುಮಾರು 17 ರಾಜ್ಯಗಳಲ್ಲಿ ಈ ಯೋಜನೆಗಳನ್ನು ಜಾರಿಗೆ ತರಲು ಸಿದ್ಧತೆಗಳು ನಡೆಯುತ್ತಿವೆ. ಈ ಯೋಜನೆಯಡಿ ಸುಮಾರು ರೂ.406 ಕೋಟಿಯನ್ನು ಮಂಜೂರು ಮಾಡಲಾಗಿದೆ._x000D_ _x000D_ ಯೋಜನೆಯ ಉದ್ದೇಶವೇನು?_x000D_ _x000D_ 1. ಈ ಯೋಜನೆಗಳ ಅಡಿಯಲ್ಲಿ ಸುಮಾರು 15 ಸಾವಿರ ಜನರಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಉದ್ಯೋಗ ನೀಡಲಾಗುವುದು. ಇದಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಉದ್ಯೋಗಾವಕಾಶ ಕಲ್ಪಿಸಲಾಗುವುದು._x000D_ 2. ಆಧುನಿಕ ಸಂಸ್ಕರಣಾ ತಂತ್ರಗಳು ಕೃಷಿ ಉತ್ಪನ್ನಗಳನ್ನು ವ್ಯರ್ಥ ಮಾಡುವುದನ್ನು ತಡೆಯುತ್ತದೆ, ಇದರಿಂದ ರೈತರ ಆದಾಯವನ್ನು ದ್ವಿಗುಣಗೊಳಿಸಬಹುದು._x000D_ 3. ಭಾರತೀಯ ರೈತರು ಅಂತರರಾಷ್ಟ್ರೀಯ ಮತ್ತು ದೇಶೀಯ ಮಾರುಕಟ್ಟೆಗಳಲ್ಲಿ ಗ್ರಾಹಕರೊಂದಿಗೆ ಸಂಪರ್ಕ ಹೊಂದುತ್ತಾರೆ._x000D_ ಪಿಎಂ ಕಿಸಾನ್ ಸಂಪದಾ ಯೋಜನೆ ಎಂದರೇನು?_x000D_ ಈ ಯೋಜನೆ ಆಗಸ್ಟ್ 2017 ರಲ್ಲಿ ಪ್ರಾರಂಭವಾಯಿತು. ಕೃಷಿಯನ್ನು ಆಧುನೀಕರಿಣಗೋಳಿ ಸುವುದು ಮತ್ತು ಕೃಷಿಯಲ್ಲಿ ಆಗುವ ವ್ಯರ್ಥವನ್ನು ಕಡಿಮೆ ಮಾಡುವುದರ ಜೊತೆಗೆ ಆಧುನಿಕ ಮೂಲ ಸೌಕರ್ಯಗಳ ಸಹಾಯದಿಂದ ಕೃಷಿ ಅಭಿವೃದ್ಧಿಯನ್ನು ಮುನ್ನಡೆಸುವುದು ಇದರ ಮುಖ್ಯ ಉದ್ದೇಶವಾಗಿದೆ. _x000D_ ಕೃಷಿ ಅಭಿವೃದ್ಧಿಯಲ್ಲಿ ಸರಿಯಾದ ನಿರ್ವಹಣೆ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಬೇಕು. ರೈತರು ತಮ್ಮ ಉತ್ಪನ್ನಗಳಿಗೆ ಸರಿಯಾದ ಮತ್ತು ಉತ್ತಮ ಬೆಲೆ ಪಡೆಯಬೇಕು. ಇದಲ್ಲದೆ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಬಹುದು._x000D_ ಮೂಲ - ಕೃಷಿ ಜಾಗರಣ , 3 ಮಾರ್ಚ್ 2020_x000D_ ಈ ಉಪಯುಕ್ತ ಮಾಹಿತಿಯನ್ನು ಲೈಕ್ ಮಾಡಿ ಮತ್ತು ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ._x000D_
572
0