AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಸಾವಯವ ಕೃಷಿT G S Avinaash
ಅಗ್ನಿಯಸ್ತ್ರ ತಯಾರಿಕೆ
ನೈಸರ್ಗಿಕವಾಗಿ ಲಭ್ಯವಿರುವ ಹಸುವಿನ ಮೂತ್ರ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ, ಬೇವಿನ ಎಲೆಗಳು, ತಂಬಾಕು ಎಲೆಗಳು ಕೀಟನಾಶಕ ಮತ್ತು ಶಿಲೀಂಧ್ರನಾಶಕ ಗುಣಗಳನ್ನು ಹೊಂದಿದ್ದು ಬೆಳೆ ಕೀಟಗಳು ಮತ್ತು ರೋಗಗಳಿಂದ ರಕ್ಷಣೆ ನೀಡುತ್ತದೆ. ಆದರೆ ಈ ಸಾವಯವವಾಗಿ ಮನೆಯಲ್ಲಿರು ಸಾಮಗ್ರಿ ಗಳಿಂದ ಅಂದರೆ ಅಗ್ನಿಯಾಸ್ತ್ರದಿಂದ ನಮ್ಮ ಹೊಲಗಳ ಬೆಳೆ ಮತ್ತು ತೋಟಗಾರಿಕಾ ಬೆಳೆಗಳ ಕೀಟ ಮತ್ತು ರೋಗವನ್ನು ರಕ್ಷಿಸುವ ಒಂದು ಪರಿಹಾರ ಇಲ್ಲಿದೆ. ಅಗತ್ಯವಿರುವ ಅಗ್ನಿಯಸ್ತ್ರ ತಯಾರಿಸಲು ಬೇಕಾಗುವ ವಸ್ತುಗಳು : ಹಸು ಮೂತ್ರ (ಗೋ ಮುತ್ರ) -20 ಲೀಟರ್ ತಂಬಾಕಿನ ಎಲೆಗಳು @ 500 ಗ್ರಾಂ. ಪುಡಿಮಾಡಿದ ಹಸಿರು ಮೆಣಸಿನಕಾಯಿ @ 500 ಗ್ರಾಂ. ಪುಡಿಮಾಡಿದ ಬೆಳ್ಳುಳ್ಳಿ @ 500 ಗ್ರಾಂ. ಬೇವಿನ ಎಲೆಗಳು k 2 ಕೆ.ಜಿ. ನೀರು @ 200 ಲೀಟರ್. ತಯಾರಿಸುವುದು ಹೇಗೆ ? ಈ ಎಲ್ಲ ಸಾಮಗ್ರಿಗಳನ್ನು ದೊಡ್ಡ ಪಾತ್ರೆಯಲ್ಲಿ ಬೇರೆಸಿ - ಹಸುವಿನ ಮೂತ್ರ (ಗೋ ಮುತ್ರ) -20 ಲೀಟರ್ ನೀರು, ರುಬ್ಬಿದ ಹಸಿರು ಮೆಣಸಿನಕಾಯಿ @ 500 ಗ್ರಾಂ, ರುಬ್ಬಿದ ಬೆಳ್ಳುಳ್ಳಿ @ 500 ಗ್ರಾಂ, ತಂಬಾಕಿನ ಎಲೆಗಳು @ 500 ಗ್ರಾಂ, ನೀರು @ 200 ಲೀಟರ್.
ಎಲ್ಲಾ ಪದಾರ್ಥಗಳನ್ನು ಸ್ವಲ್ಪ ಕಡಿಮೆ ಬೆಂಕಿಯಲ್ಲಿ ಸ್ವಲ್ಪ ಸಮಯದವರೆಗೆ ಕುದಿಸಿ ನಂತರ ಬೇವಿನ ಎಲೆಗಳನ್ನು @ 2 ಕೆಜಿ ಎಲೆಗಳನ್ನು ಸೇರಿಸಿ. ಕುದಿಯುವಿಕೆಯ ಪೂರ್ಣಗೊಳಿಸುವಿಕೆಯು ಆ ಕಷಾಯವನ್ನು 48 ಗಂಟೆಗಳ ಕಾಲ ನೇರಳಿನಲ್ಲಿ ಇರಿಸಿ. ಅದರ ನಂತರ ಅದನ್ನು ಕಾಟನ ಬಟ್ಟೆಯಿಂದ ಸೋಸಿದ ನಂತರ ಹೊಲದಲ್ಲಿ ಸಿಂಪಡಿಸಲು ಸಿದ್ಧವಾಗಿದೆ. ಸಿಂಪಡಿಸುವುದು ಹೇಗೆ? ದ್ರಾವಣವನ್ನು ಸಿಂಪಡಿಸುವ ಮೊದಲು ದ್ರಾವಣವನ್ನು 6 ಲೀಟರ್ ಅಗ್ನಿಯಾಸ್ತ್ರ ವನ್ನು 200 ಲೀಟರ್ ನೀರಿನೊಂದಿಗೆ ಬೇರೆಸಿ ದ್ರಾವಣವನ್ನು ತಯಾರಿಸಿ ನಂತರ ನಿಮ್ಮ ಬೆಳೆಗೆ ಕಷಾಯದ ದ್ರಾವಣವನ್ನು ಸಿಂಪಡಿಸಿ. ಇದರಿಂದಾಗಿ ನಿಮ್ಮ ಬೆಳೆಯನ್ನು ಆರೋಗ್ಯಕರವಾಗಿ ಮತ್ತು ತಾಜಾವಾಗಿರಿಸಿಕೊಳ್ಳಬಹುದು. ಈ ವೀಡಿಯೊ ಮತ್ತು ಮಾಹಿತಿಯನ್ನು ನಿಮಗೆ ಇಷ್ಟವಾದರೆ, ಲೈಕ್ ಮಾಡಿ ಮತ್ತು ನಿಮ್ಮ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
1
0